Breaking News

ಕವನಗಳು

ಮತದಾನದ ಮಹತ್ವ

  ಚುನಾವಣೆಯು ಬಂದಾಯ್ತು ಅಭ್ಯರ್ಥಿಯು ನಿಂತಾಯ್ತು ಮತದ ಆಮಿಷ ಶುರುವಾಯ್ತು ಮನ ವೊಲಿಸಲು ತಿಪ್ಪರ ಲಾಗ ಹಾಕಾಯ್ತು ಏತಕೆ ಈ ಪರಿ ಬೇಡಿಕೆಯು ಮಾಡಬೇಕಲ್ಲವೇ ಕಾಯಕವು ಮತದಾರ ಯೋಚಿಸಿ ಮತ ನೀಡುವನು ತಿಳಿದಿದ್ದಾನೆ ನಾಯಕರಾರೆಂದು ವೋಟ್ ಪಡೆಯಲು ಗಿಮಿಕ್ ಶುರುವಾಯ್ತು ಅಶ್ವಾಸನೆ ಪಟ್ಟಿ ನೀಡಾಯ್ತು ಪರಿ ಪರಿ ಸುಳ್ಳಿನ ಕಂತೆ ಹೊಸೆ ದಾಯ್ತು ಜೊತೆಗೇ ನೋಟಿನ ಆಮಿಷ ವೊಡ್ಡಾಯ್ತು ಮತದಾರನೇ ನೀ ಎಚ್ಚರವಿರ ಬೇಕಯ್ಯ ಅಭ್ಯರ್ಥಿ ಯಾರೆಂದು ಯೋಚನೆ ಮಾಡಬೇಕಯ್ಯ …

Read More »

ಬೆಳದಿಂಗಳ ತಂಪು ಚಂದಿರನಲ್ಲಿ   ನಿನ್ನನ್ನೇ ಹುಡುಕಾಡಿದೆ ಸಖ

ಗಜ಼ಲ್ ಬೆಳದಿಂಗಳ ತಂಪು ಚಂದಿರನಲ್ಲಿ   ನಿನ್ನನ್ನೇ ಹುಡುಕಾಡಿದೆ ಸಖ ಹೊಳೆಯುವ ಕಂಗಳ ಬೆಳಕನ್ನು ಎಲ್ಲೆಲ್ಲೂ ತಡಕಾಡಿದೆ ಸಖ// ಮುಂಜಾನೆಯ ನೇಸರನಿಗೆ ಏಕೋ ಮುನಿಸು ಬಂದಿದೆ ಸಂಜೆಯಲಿ ನಿನಗಾಗಿ ದಾರಿ ಕಾದು ಮಿಡುಕಾಡಿದೆ ಸಖ// ತಂಗಾಳಿಯ ತಂಪೇಕೋ ಕಾದ ಬಿಸಿಲಾದಂತೆ ಭಾಸವಾಗುತಿದೆ ಮುಂಗೋಳಿ ಕೂಗಿದರೂ ನೀ ಇಲ್ಲಿಗೇಕೋ ಬರದಾದೆ ಸಖ// ನದಿಯಲ್ಲಿ ಜೋರು ಅಲೆಗಳ ಏರಿಳಿತಗಳೇಳುತಿವೆ ಇಂದು ಹದಿಹರೆಯದ ಹೆಣ್ಣಮನದ ಬಯಕೆ ಅರಿಯದಾದೆ ಸಖ// ಜಲ ಳ ಮೃದು ಮನದಿ …

Read More »