Breaking News
Home / ರಾಜ್ಯ / ರಾಜ್ಯದಲ್ಲಿ ಕೋವಿಡ್‌ ಕೇಸ್‌ ಏರಿಕೆ ಹೊತ್ತಲ್ಲೇ ಕೋಡಿಶ್ರೀ ಸ್ಫೋಟಕ ಭವಿಷ್ಯ!

ರಾಜ್ಯದಲ್ಲಿ ಕೋವಿಡ್‌ ಕೇಸ್‌ ಏರಿಕೆ ಹೊತ್ತಲ್ಲೇ ಕೋಡಿಶ್ರೀ ಸ್ಫೋಟಕ ಭವಿಷ್ಯ!

Spread the love

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿರುವುದು ವರದಿಯಾಗಿದೆ. ಇದರಿಂದ ರಾಜ್ಯದ ಜನ ಆತಂಕಕ್ಕೆ ಒಳಗಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೇ 32 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತ ಮಾಹಿತಿ ನೀಡಿ, ಜನರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.

ಇತ್ತ ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು (ಕೋಡಿಶ್ರೀ) ಈ ಮಹಾಮಾರಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಈ ಸಂವತ್ಸರದಲ್ಲಿ ಒಂದು ಹೊಸ ರೋಗ ಬರುವ ಸೂಚನೆ ಇದೆ. ಇದು ಐದು ವರ್ಷಗಳವರೆಗೆ ಇರುತ್ತೆ. ಈ ರೋಗ ಮತ್ತೊಂದು ರೂಪವನ್ನು ತಾಳಲಿದೆ. ಈ ಬಾರಿ ವಾಯು ರೂಪದಲ್ಲಿ ಈ ರೋಗ ಬರುತ್ತೆ. ವಾಯುಮಾಲಿನ್ಯ ಆಗಿದೆ. ಭೂಮಾಲಿನ್ಯ ಆಗಿದೆ, ಜಲಮಾಲಿನ್ಯವೂ ಆಗಿದೆ. ಯಾವುದೂ ನಮಗೆ ಒಳ್ಳೆ ರೀತಿಯಲ್ಲಿ ಸಿಕ್ತಿಲ್ಲ. ಹಾಗಾಗಿ ಜನರ ತಮ್ಮ ಹುಷಾರಿನಲ್ಲಿರುವುದು ಒಳ್ಳೆಯದು ಎಂದಿದ್ದಾರೆ.

 

ಈ ಬಾರಿ ಬರುವಂತಹ ಖಾಯಿಲೆ ಬಹಳ ಘೋರವಾಗಿದೆ. ವಾಯುರೂಪದಲ್ಲಿ ಕಫ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಲಕ್ಷ್ಮಣಗಳಿವೆ. ಈ ಗಂಡಾಂತರ ಇಡೀ ಲೋಕಕ್ಕೇ ಇದೆ. ಇದರ ಆಯಸ್ಸು ಐದು ವರ್ಷ ಇರಬಹುದು. ಮಧ್ಯದಲ್ಲಿ ಕಡಿಮೆಯಾಗಿ ಮತ್ತೆ ಹೆಚ್ಚಾಗಬಹುದು ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.

ರೋಗ್ಯ ಸಚಿವ ಹೇಳಿದ್ದೇನು?

ಈ ವರ್ಷ ನಾವು ಕರ್ನಾಟಕದಲ್ಲಿ ಇದುವರೆಗೆ 35 ಕೋವಿಡ್‌ ಪ್ರಕರಣಗಳನ್ನು ಕಂಡಿದ್ದೇವೆ. ಅದರಲ್ಲಿ 32 ಕೇಸ್‌ ಬೆಂಗಳೂರಿನಲ್ಲಿ ವರದಿಯಾಗಿವೆ. ಕಳೆದ 20 ದಿನಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ. ಆದರೆ ಯಾವುದೇ ಗಂಭೀರ ಪರಿಸ್ಥಿತಿ ವರದಿಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಕೋವಿಡ್‌-19 ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದಾರೆ.


Spread the love

About Ad9 Haberleri

Check Also

ಮರಿಯಪ್ಪ ಮರಿಯಪ್ಪಗೋಳ ಅವರಿಗೆ ಸಮಾಜ ಸೇವಕ ಪ್ರಶಸ್ತಿ 

Spread the love ಬೆಂಗಳೂರು : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ) ವತಿಯಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ …

Leave a Reply

Your email address will not be published. Required fields are marked *