Breaking News

ಸ್ವಚ್ಛತೆಗಾಗಿ ಸಂಕೇಶ್ವರ ನಗರದ ಹೋಟೆಲ್‌ ಮಾಲೀಕರಿಗೆ ಎಚ್ಚರಿಕೆ !

Spread the love

ಸಂಕೇಶ್ವರ ಕೋವಿಡ್ 19 ವೈರಸ್‌ ಎಲ್ಲ ಕಡೆ ಹರಡುತ್ತಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಶುಕ್ರವಾರ ದಾಳಿ ನೆಡೆಸಿದ ಸಂಕೇಶ್ವರ ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಗೌಡ ಪಾಟೀಲ ಹಾಗೂ ಪರಿಸರ ಅಭಿಯಂತರರು ನಾರಾಯಣ ವಿ. ನಾಯಿಕ ನಗರದ ಹೋಟೆಲ್‌ ಮತ್ತು ಬೇಕರಿಗಳ ಮೇಲೆ ದಾಳಿ ನೆಡೆಸಿ ಸ್ವಚ್ಛತೆ ಇಲ್ಲದಿದ್ದರೆ ಬೀಗ ಜಡಿಯಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಸಂಕೇಶ್ವರ ಪುರಸಭೆಯ ತಂಡ ನಗರದಲ್ಲಿರುವ ಬೇಕರಿ, ಹೋಟೆಲ್‌ ಹಾಗೂ ಚಿಕನ್ ಸೆಂಟರ್ ಗಳಿಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಹೊಟೇಲ್‌ನ ಗೋಡಾವನ್ ಸೇರಿದಂತೆ ಅಡುಗೆ ಮನೆ ಎಲ್ಲಾ ಕಡೆ ಪರಿಶೀಲನೆ ನೆಡೆಸಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ವರದಿ:ಸಚೀನ ಕಾಂಬಳೆ


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …