Breaking News
Home / ಬೆಳಗಾವಿ / ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ

ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ

Spread the love

ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ
ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ
ಸುಧಾರಣೆಗೆ ಆದ್ಯತೆ ನೀಡಿದ್ದು, ಈಗಾಗಲೇ 2.90 ಕೋಟಿ ರೂ.
ಅನುದಾನ ಮಂಜೂರಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ
ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರದಂದು
ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾಜ್ಯ
ಹೆದ್ದಾರಿ-44 ರ 2.90 ಕೋಟಿ ರೂ. ವೆಚ್ಚದ ಯಾದವಾಡ-ಕುಲಗೋಡ
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು
ಮಾತನಾಡಿದರು.
ವಾರದೊಳಗೆ ರಾಜ್ಯ ಹೆದ್ದಾರಿ ನಿರ್ವಹನೆ ಯೋಜನೆಯಡಿ
ಲೆಕ್ಕಶೀರ್ಷಿಕೆ 3054 ರಡಿ 2 ಕೋಟಿ ರೂ. ಅನುದಾನ
ಬಿಡುಗಡೆಯಾಗಲಿದ್ದು, 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ
ಸುಧಾರಣೆ ನಡೆಯಲಿದೆ. ಯಾದವಾಡದ ಸಂಗೊಳ್ಳಿ ರಾಯಣ್ಣ
ವೃತ್ತದಿಂದ 3 ಕಿ.ಮೀ. ವರೆಗಿನ ರಸ್ತೆ ಕಾಮಗಾರಿಯನ್ನು
ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಮನವಿಯ ಮೇರೆಗೆ
ಯಾದವಾಡದಿಂದ ಕುಲಗೋಡವರೆಗಿನ ರಸ್ತೆಯನ್ನು ಸುಧಾರಣೆ
ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಶೀಘ್ರ 15 ಕೋಟಿ ರೂ. ಬಿಡುಗಡೆ : ಈ ರಸ್ತೆ
ಕಾಮಗಾರಿಯನ್ನು ಪೂರ್ಣವಾಗಿ ಕೈಗೊಳ್ಳಲಿಕ್ಕೆ ಲೋಕೋಪಯೋಗಿ
ಇಲಾಖೆಯ ಎಸ್‍ಎಚ್‍ಡಿಪಿ ಯೋಜನೆಯಡಿ 15 ಕೋಟಿ ರೂ.ಗಳ ಅನುದಾನ
ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,
ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆಯಾಗಲಿದೆ. ಯಾದವಾಡ-
ಕುಲಗೋಡ ವರೆಗಿನ 15 ಕಿ.ಮೀ ರಸ್ತೆ ಕಾಮಗಾರಿಯನ್ನು 3
ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು
ಹೇಳಿದರು.
ದಿನೇ ದಿನೇ ಔದ್ಯೋಗಿಕವಾಗಿ ಬೆಳೆಯುತ್ತಿರುವ ಯಾದವಾಡ
ಗ್ರಾಮಕ್ಕೆ ಸಂಚರಿಸುವ ರಸ್ತೆಗಳಲ್ಲಿ ಭಾರವಾದ ವಾಹನಗಳು
ಸಂಚರಿಸುತ್ತಿರುವುದರಿಂದ ರಸ್ತೆ ಮೇಲಿಂದ ಮೇಲೆ ಹದಗೆಡುತ್ತಿದೆ.
ಅದಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಯನ್ನು
ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರಿಗೆ ನೀಡಿರುವ
ಭರವಸೆಯಂತೆ ಯಾದವಾಡ-ಕುಲಗೋಡ ರಸ್ತೆಯನ್ನು
ಸುಧಾರಣೆಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ
ಮಾಡಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.


Spread the love

About Ad9 Haberleri

Check Also

ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ ಬಸಗೌಡ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಸೋನಪ್ಪನವರ ಅವಿರೋಧವಾಗಿ ಆಯ್ಕೆ

Spread the love*ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ* *ಬೆಳಗಾವಿ*- ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ …