Breaking News

ಕಲಬುರಗಿ ಜಿಲ್ಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ

Spread the love

ಅಫಜಲಪೂರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡೀಜಲ್ ಪೆಟ್ರೋಲ್ ಮತ್ತು ಅಡುಗೆ ಅನಿಲ ಬೆಲೆ ಹಾಗೂ ದಿನ ಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಶ್ರೀ ಅರುಣ್ ಕುಮಾರ್ ಎಂ ವೈ ಪಾಟೀಲ್ ಅವರ ನೇತೃತ್ವದಲ್ಲಿ ಬಸವೇಶ್ವರ ಸರ್ಕಲ್ ದಿಂದ ಸೈಕಲ್ ಜಾಥಾ ಮಾಡಿ ಮಾನ್ಯ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶರಣು ಕುಂಬಾರ ಮಾಜಿ ಜಿ.ಪಂ.ಸದಸ್ಯರಾದ ಸಿದ್ಧಾರ್ಥ ಬಸರಿಗಿಡ ಪುರಸಭೆ ಅಧ್ಯಕ್ಷರಾದ ರಾಜಶೇಖರ ಪಾಟೀಲ್ ಮತ್ತು ಸದಸ್ಯರಾದ ಯಮನಪ್ಪ ಬಾಸಗಿ ಮತೀನ್ ಪಟೇಲ್ ಕಾಂಗ್ರೇಸ ಮುಖಂಡರಾದ ಶಿವಾನಂದ ಗಾಡಿಸಾಹುಕಾರ ಸಚಿನ ಲಿಂಗಶೇಟ್ಟಿ ಅನಿಲ ಉಪ್ಪಿನ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡರು.

ವರದಿ.ಸುರೇಶ.ಇಬ್ರಾಹಿಂಪುರ


Spread the love

About Ad9 News