
ಮುಧೋಳ: ನಗರ ಶಾಮೇಲ್ಸ್ ಪ್ರೌಢ ಶಾಲೆಯ ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 13 ಅಂಕಪಡೆಯುವದರೊಂದಿಗೆ 625 ಕ್ಕೆ 625 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆ ನಿಮಿತ್ಯ ನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ವರ್ಗದವರು ಗುರುವಾರದಂದು ವಿದ್ಯಾರ್ಥಿಯ ಮನೆಯಲ್ಲಿ ಸತ್ಕರಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ವಿದ್ಯಾಸಾಗರ ಬೋವಿ, ವಿರೇಶ ರೇಬಿನಾಳ, ಹಣಮಂತ ಪಿಡಶೆಟ್ಟಿ, ವಿಶ್ವನಾಥ ಸುಳೆಬಾವಿ, ವಿಠ್ಠಲ್ ಚಿಕಲಕ್ಕಿ, ಶಾನೂರ ಕಳ್ಳಿಮನಿ ಹಾಗೂ ವಿದ್ಯಾರ್ಥಿ ತಂದೆ-ತಾಯಿ ಉಪಸ್ಥಿತರಿದ್ದರು
Ad9 News Latest News In Kannada