ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ. ಎನ್ ಎಸ್ ಎಸ್ ಘಟಕವು ಗುರ್ಲಾಪುರ ಗ್ರಾಮದಲ್ಲಿ ಶ್ರಮದಾನ ಮಾಡುತ್ತಿದು ಶಾಲಾ ಕೊಟ್ಟಡಿ, ಹಿಂದೂ ರುದ್ರ ಭೂಮಿ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛಗೋಳಿಸಿ ಅಲ್ಲಿ ಗಿಡಗಳನ್ನು ಹಚ್ಚುವ ಕೆಲಸ ಮಾಡಿದರು.
ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ. ಎನ್ ಎಸ್ ಎಸ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪಿ ಎಸ್ ಆಯ್ ಶ್ರೀ ಮಲಿಕಾಜು೯ನ ಸಿಂಧೂರ್ ಅವರು ರಸ್ತೆ ನಿಯಮಗಳು, ವಾಹನ ಪರವಾನಿಗೆ, ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮಕ್ಕಳಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಅರಿವು ಮೂಡಿಸಿದರು.
ಇದೆ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ
ಕಾರ್ಯದರ್ಶಿ ಶ್ರೀ ಈರಪ್ಪ ಎಸ್ ಢವಳೇಶ್ವರ ಅವರು ಮಾತನಾಡಿ ಮೂಡಲಗಿ ತಾಲೂಕಿನಲ್ಲಿ ಒಂದು ಕ್ಯಾಂಪ್ ಹಾಕಿ ವಿದ್ಯಾರ್ಥಗಳಿಗೆ ಉಚಿತವಾಗಿ ವಾಹನ ಪರವಾನಿಗೆ ನಿಡಬೇಕು. ಅದಕ್ಕೆ ಸಂಬಂಧಿಸಿದ ಎಲ್ಲ ವ್ಯವಸ್ಥೆ ಕಾಲೇಜಿನ ಪ್ರಾಂಶುಪಾಲರು ನಾವುಗಳು ಮಾಡುತ್ತೇವೆ ಎಂದು ಹೆಳಿದರು. ಇದಕ್ಕೆ ಪಿ ಎಸ್ ಆಯ್ ಸಾಹೇಬರು ಅತಿ ಶೀಘ್ರದಲ್ಲಿ ಸಂಬಂಧ ಪಟ್ಟ ಆರ್ ಟಿ ಓ ಅವರ ಜೊತೆ ಮಾತನಾಡಿ ಕ್ಯಾಂಪ್ ಹಾಕುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿವಾನಂದ ಚಂಡಕೆ ಕಾಲೇಜಿನ ಪ್ರಾಂಶುಪಾಲರಾದ ಡಾ// ಆರ್ ಬಿ ಕೋಕಟನೂರ, ಸಂಯೋಜಕರಾದ
ಸಂಜುವಕುಮಾರ ಗಾಣಿಗೆರ, ಪುರಸಭೆ ಸದಸ್ಯರಾದ ಆನಂದ ಟಪಾಲದಾರ ಸ್ಥಳೀಯ
ಮುಖಂಡರಾದ ಎಮ ಜಿ ಮುಗಳಖೋಡ ಸಿದ್ದು ಗಡ್ಡೆಕಾರ ಮುಂತಾದವರು ಭಾಗವಹಿಸಿದ್ದರು.