ಮೂಡಲಗಿ: ಏ.24 ರಂದು ಮಧ್ಯಾನ್ಹ 1ಗಂಟೆಗೆ, ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು, ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯನವರು ಮೂಡಲಗಿ ಪಟ್ಟಣದ ಬಸವ ಮಂಟಪಕ್ಕೆ ಆಗಮಿಸುತ್ತಿದ್ದು ಕಾರಣ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಹೇಳಿದರು.
ಶುಕ್ರವಾರದಂದು ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2023ರ ವಿಧಾನ ಸಭಾ ಚುನಾವಣೆಗೆ ನನ್ನ ನಾಮಪತ್ರ ಅಂಗೀಕಾರವಾಗಿದ್ದು, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದೇನೆ, ಕಾಂಗ್ರೆಸ್ ಕಟ್ಟಾಳಾಗಿ, ನಾನು ಪಕ್ಷ ಸೂಚಿಸಿದ ಸಭೆ, ಸಮಾರಂಭ, ಪ್ರತಿಭಟನೆ ಪಾದಯಾತ್ರೆ ಮುಂತಾದ ಕಾರ್ಯಕ್ರಮಗಳ ಮೂಲಕ ಪಕ್ಷ ಸಂಘಟನೆ ಮಾಡಿದ್ದೇನೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಅರಭಾವಿಯ ಜನತೆ ರಾಜಕೀಯ ಬದಲಾವಣೆ ಬಯಸಿದ್ದು, ಭ್ರμÁ್ಟಚಾರ ಮುಕ್ತ ಕ್ಷೇತ್ರವಾಗಿಸಲು ಈ ಸಲ ನನ್ನ ಗೆಲವು ಶತ ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಅರಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಮಗದುಮ್, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಅರಳಿ, ಮಲೀಕ ಲಾಡಖಾನ, ಇಮಾಮ್ ಹುನ್ನೂರ, ಜಗದೀಶ್ ಜೋಗನ್ನವರ್, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.