ಮೂಡಲಗಿ: ಪಟ್ಟಣ ಪಂಚಾಯತ ನಾಗನೂರ ವ್ಯಾಪ್ತಿಯಲ್ಲಿ ರವಿವಾರ ರಂದು “ *ನಮ್ಮ ನಡೆ ಮತಗಟ್ಟೆ ಕಡೆ” ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಪ್ರಯುಕ್ತ ಮತಗಟ್ಟೆಗಳಲ್ಲಿ ಧ್ವಜಾರೋಹಣ, ಮತದಾರ ಪ್ರತಿಜ್ಞಾ ವಿಧಿ, ಮತದಾರರ ಜಾಗೃತಿ ಜಾಥಾ ಹಾಗೂ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಲಾಯಿತು.
ನಾಗನೂರ ಕೇಂದ್ರ ಶಾಲೆಯಲ್ಲಿ ಪ್ರಧಾನ ಗುರುಗಳಾದ ಶ್ರೀ ಬಿ.ಬಿ ಸಸಾಲಟ್ಟಿ ಧ್ವಜಾರೋಹಣ ಮಾಡಿದರು. ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಸಿಬ್ಬಂದಿ ಬಿ.ಎಲ್ ಓ- ಗಳು ಮತದಾನ ಜಾಗೃತಿ ಘೋಷಣೆ ಮಾಡಿದರು. ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶ್ರೀಮತಿ ವಿದ್ಯಾಶ್ರೀಯವರು ಮತದಾನದ ಮಹತ್ವ ತಿಳಿಸಿದರು. ಗ್ರಾಮ ಲೆಕ್ಕಾಧಿಕಾರಿ ಶ್ರೀ ಜಿ. ಬಿ ಮುತ್ತೆಪ್ಪಗೋಳ ಪಂಚಾಯತ ಎಸ್. ಡಿ ಆರ್ ಶ್ರೀ ಯಶವಂತ ಕರಬನ್ನವರ, ಶ್ರೀ ರಾಜು ಮೇತ್ರಿ, ಶ್ರೀ ಬಸು ಪೂಜೇರಿ ಹಾಜರಿದ್ದರು.