Breaking News

ದಿನದ 4 ಘಂಟೆ ಅಗತ್ಯ ವಸ್ತುಗಳು ಮತ್ತು ಕಿರಾಣಿ, ತೆರೆಯಲು ಜಿಲ್ಲಾ ಆಡಳಿತ ಅನುಮತಿ

Spread the love

ಮುಧೋಳ:  ದಿನದ 4 ಘಂಟೆ ಅಗತ್ಯ ವಸ್ತುಗಳು ಮತ್ತು ಕಿರಾಣಿ, ತೆರೆಯಲು ಜಿಲ್ಲಾ ಆಡಳಿತ ಅನುಮತಿ

ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 4 ಗಂಟೆ ದಿನಸಿ ಅಂಗಡಿ ತೆರೆಯಲು. ಜಿಲ್ಲಾ ಆಡಳಿತ ಸೂಚಣೆ

ದೇಶವನ್ನು ಏಪ್ರಿಲ್ 14ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಹೀಗಾಗಿ ರೈಲು, ಬಸ್ಸು ಸಂಚಾರ ಸೇರಿ ಎಲ್ಲ ವಾಹನಗಳ ಓಡಾಟವನ್ನು ರದ್ದು ಮಾಡಲಾಗಿದೆ. ದೇಶವನ್ನು ಏಕಾಏಕಿ ಬಂದ್ ಮಾಡಿರುವುದರಿಂದ ದಿನನಿತ್ಯದ ವಹಿವಾಟಿನ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿದೆ. ದೇಶ ಲಾಕ್​ ಡೌನ್​ ಆಗಿ ಎರಡು ದಿನ ಆಗಿರುವುದರಿಂದ ಆಹಾರ ಸಾಮಗ್ರಿಗಳ ಕೊರತೆ ಕಂಡು ಬಂದಿಲ್ಲ. ಆದರೆ ಕೆಲವು ದಿನಗಳ ನಂತರ ದಿನನಿತ್ಯ ಬಳಕೆಯ ದಿನಸಿಗಳ ಅಭಾವ ಎದುರಾಗಲಿದೆ.
ಆಹಾರ ಸಾಮಗ್ರಿ ಅಭಾವ ಎದುರಾಗುವುದನ್ನು ಮನಗಂಡಿರುವ ಸರ್ಕಾರ, ಅಗತ್ಯ ಕ್ರಮ ವಹಿಸುತ್ತಿದೆ.

ಅದೇ ರೀತಿ ದಿನದ 4 ಗಂಟೆ ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಹಾಗೆಯೇ ವೈದ್ಯಕೀಯ ಚಿಕಿತ್ಸೆ, ನೆರವು ಬೇಕಾದವರಿಗೆ ಕರ್ಫ್ಯೂ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.


Spread the love

About Ad9 News