Breaking News

ರಾಜ್ಯ ಸರ್ಕಾರವು ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ

Spread the love

.

ಬೆಂಗಳೂರು : ರಾಜ್ಯ ಸರ್ಕಾರವು ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಉಪನ್ಯಾಸಕರ ವೇತನಕ್ಕಾಗಿ ರಾಜ್ಯ ಸರ್ಕಾರವು ನಾಲ್ಕನೇ ತ್ರೈಮಾಸಿಕ ಅನುದಾನ 148.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

         ರಾಜ್ಯದ ಸುಮಾರು 655 ಪದವಿಪೂರ್ವ ಕಾಲೇಜುಗಳ ಹತ್ತು ಸಾವಿರ ಉಪನ್ಯಾಸಕರಿಗೆ ಕಳೆದ ಎರಡು ತಿಂಗಳಿಂದ ವೇತನ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ 148.50 ಕೋಟಿ ರೂ.ಗಳನ್ನು ವಿತರಣೆ ಮಾಡಿದೆ. ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕೋರಿಕೆ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ.

       ಇನ್ನು ಮೂರನೇ ತ್ರೈಮಾಸಿಕ ವೇತನದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡಿ ವರ್ಷಾಂತ್ಯದ ಬಿಲ್ಲುಗಳನ್ನು ಪೂರ್ಣಗೊಳಿಸಲು ಪಿಯು ಇಲಾಖೆ ನಿರ್ಧರಿಸಿದೆ.


Spread the love

About Ad9 News

Check Also

ಅಸೋಷಿಯೇಷನ್ ವತಿಯಿಂದ ಸಚಿವರಿಗೆ ಸನ್ಮಾನ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್

Spread the love ಅಖಿಲಕರ್ನಾಟಕ ಫೈನಾನ್ಸಿಯರ್ಸ್ ಅಸೋಷಿಯೇಷನ್ ನಿಂದ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು ದಿನಾಂಕ 5-3-2020 ರಂದು ಸಹಕಾರ …