Breaking News
Home / ಮೂಡಲಗಿ / ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ*

ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ*

Spread the love


ಮೂಡಲಗಿ: ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ಜರುಗಿದ ಭಜನಾ ಕಾರ್ಯಕ್ರಮದಲ್ಲಿ ಪ್ರತಿದಿನ ಪಾಲ್ಗೊಂಡ ಮೂರು ವರ್ಷದ ಅಮೀತ್ ಶಿವಾನಂದ ಮಡಿವಾಳರ ಎಂಬ ಬಾಲಕನ್ನು ಭಜನಾ ಮಂಡಳಿಯವರು ಸತ್ಕರಿಸಿ ಗೌರವಿಸಿದರು.

ಮುನ್ಯಾಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ದಿವಸ ಮುಂಜಾನೆ ಮತ್ತು ರಾತ್ರಿ ಭಜನಾ ಕಾರ್ಯಕ್ರಮ ಜರುಗುವುದು. ಪ್ರತಿದಿನ ಬೆಳಗಿನ ಜಾವ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಿಂದ ಗ್ರಾಮದ ವಿವಿಧ ಗಲ್ಲಿಯ ಮುಖಾಂತ ಮರಳಿ ದೇವಸ್ಥಾನಕ್ಕೆ ತಲುಪುವ ಓಂಕಾರ ಭಜನೆಯಲ್ಲಿ ಮೂರು ವರ್ಷದ ಬಾಲಕ ಅಮೀತ್ ಶಿವಾನಂದ ಮಡಿವಾಳರ ಪ್ರತಿ ದಿನ ಭಜನಾ ಮಂಡಳಿಯವರೊಂದಿಗೆ ಕೂಡಿ ದಮಡಿ ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಭಜನಾ ಮಂಡಳಿಯವರು ಮೂರು ವರ್ಷದ ಬಾಲಕ ಅಮೀತನ್ನು ಭಜನಾ ಸಮಾರೋಪ ದಿನದಂದು ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಭಜನಾ ಕಲಾವಿದರಾದ ಅರ್ಜುನ್ ಚಿವಟಗುಂಡಿ, ಸಂಗಪ್ಪ ಮುರಗೋಡ, ಹಣಮಂತ ಸನದಿ, ಪಾಂಡಪ್ಪ ಢವಳೇಶ್ವರ, ಸದಾಶಿವ ಗೋಡಿಗೌಡ್ರ, ವಿಠ್ಠಲ ಮಡಿವಾಳರ, ಬಾಳಪ್ಪ ನಾಯಿಕ, ಸಿದ್ದಾರೂಢ ಬಡಿಗೇರ, ಉಮೇಶ ಕೌಜಲಗಿ, ಲಕ್ಷ್ಮೀ ಮಡಿವಾಳರ, ಕಾಳವ್ವ ಮಡಿವಾಳರ, ಮಹಾದೇವಿ ಬಾಲಾಮಸಿ, ವಿನಾಯಕ ಮಡಿವಾಳರ ಮತ್ತಿತರರು ಇದ್ದರು.


Spread the love

About Ad9 Haberleri

Check Also

ಮೃತಪಟ್ಟ ಮಾಲಧಾರಿಗಳಿಗೆ ಸರ್ಕಾರದಿಂದ 5 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಲು ಅಗ್ರಹಿಸಿ ಮೂಡಲಗಿ ಅಯ್ಯಪ್ಪ ಸ್ವಾಮಿ ಮಾಲಾದರಿಗಳಿಂದ ಮನವಿ

Spread the love ಮೂಡಲಗಿ : ಹುಬ್ಬಳ್ಳಿ ನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿರುವ ಹಿನ್ನೆಲೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ …

Leave a Reply

Your email address will not be published. Required fields are marked *