Breaking News
Home / ಬೆಳಗಾವಿ / ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ

ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ

Spread the love


ಮೂಡಲಗಿ: ನೂತನ ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದರು.
ಅವರು ಬುಧವಾರ ಪಟ್ಟಣನದಲ್ಲಿ ನೂತನ ತಾಲೂಕು ಪಂಚಾಯತ ಕಾರ್ಯಾಲಯವನ್ನು ಪ್ರಾರಂಭಿಸುವ ಸಲುವಾಗಿ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.               

       ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಉಪಸ್ಥಿತಿಯಲ್ಲಿ ಇದೇ ಭಾನುವಾರ 26 ರಂದು ಉದ್ಘಾಟಿಸುವರು. ಮೂಡಲಗಿ ತಾಲೂಕು ವ್ಯಾಪ್ತಿಯ ಜನತೆಗೆ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ಅನುಕೂಲವಾಗುವದು. ಪ್ರಮುಖವಾಗಿ ಅಭಿವೃದ್ಧಿ ಕೆಲಸಗಳನ್ನು ತುರ್ತಾಗಿ ಕೈಗೋಳ್ಳಲು ಸಹಾಯಕವಾಗುವದು. ಈಗಿರುವ ಸಿಬ್ಬಂದಿಗಳ ಹಾಗೂ ಸ್ಥಳೀಯ ಇತರೆ ಇಲಾಖೆಗಳ ಪರಸ್ಪರ ಸಹಕಾರದಿಂದ ಕಛೇರಿಗೆ ಬೇಕಾಗುವ ಅಗತ್ಯ ಸಲಕರಣೆಗಳನ್ನು ನಿರ್ಮಾಣ ಮಾಡಲಾಗುವದು ಎಂದು ಹೇಳಿ ಸ್ಥಳೀಯರು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು.
ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ನಗರದಲ್ಲಿ ತಹಶಿಲ್ದಾರ, ಬಿಇಒ, ಆರೋಗ್ಯ ಕೇಂದ್ರಗಳು, ಸಿಡಿಪಿಒ, ಕೋರ್ಟ್, ಎಪಿಎಮ್.ಸಿ ಹಾಗೂ ದಕ್ಷಿಣ ಭಾರತದಲ್ಲಿಯೇ ಪ್ರಖ್ಯಾತಿ ಹೊಂದಿರುವ ದನಗಳ ಪೇಟೆ ಇದ್ದು ಈಗಾ ಪ್ರಾರಂಭಗೊಳ್ಳುತ್ತಿರುವ ತಾಪಂ ಕಛೇರಿಯಿಂದಾಗಿ ಎಲ್ಲ ಇಲಾಖೆಗಳಿಗೆ ಸಹಾಯಕವಾಗುವದು. ನಗರದ ಹಾಗೂ ತಾಲೂಕಿನ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದರು.

    ಈ ಸಂದರ್ಭದಲ್ಲಿ ತಾಪಂ ಗೋಕಾಕನ ಸಹಾಯ ನಿರ್ಧೇಶಕರಾದÀ ಎಸ್.ಎಚ್ ದೇಸಾಯಿ, ನೂತನ ಮೂಡಲಗಿ ತಾಪಂ ಸಹಾಯಕ ನಿರ್ಧೇಶಕ ಸಂಗಮೇಶ ರೊಡ್ಡನವರ, ಕಛೇರಿ ವ್ಯವಸ್ಥಾಪಕ ಹಣಮಂತ ತಾಳಿಕೋಟಿ, ಪಿಡಿಒ ಹನಮಂತ ಬಸಳಿಗುಂದಿ, ಗಂಗಾಧರ ಮಲ್ಹಾರಿ, ರಂಗಪ್ಪ ಗುಜನಟ್ಟಿ, ಎಸ್ ಎಲ್ ಬಬಲಿ, ಎ.ಆರ್ ಗಚ್ಚಿ, ಶಿವಾನಂದ ಸಂಪಗಾರ ಉಪಸ್ಥಿತರಿದ್ದರು.

ವರದಿ: ಕೆ.ವಾಯ್ ಮೀಶಿ


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …