Breaking News

🌹🌹 ಉಸಿರೇ…… 🌹🌹

Spread the love

🌹🌹 ಉಸಿರೇ…… 🌹🌹

ಬೆಳದಿಂಗಳೇ…..
ಒಮ್ಮೆ ಕುಳಿತು ಮಾತಾಗುವ
ನಕ್ಷತ್ರಗಳ ಉಯ್ಯಾಲೆ
ಮಾಡಿ ಕಾಯುವೆಯಾ
ಕದ ತಟ್ಟಿ ನಿಂತ
ಸಾವನ್ನು ನಿಲ್ಲಿಸಿ ಬರುವೆ
ಹುಣ್ಣಿಮೆ ಕಥೆಗಳ
ಸಂಪ್ರೀತಿಯ ಸಾರ
ಉಣ ಬಡಿಸು

ಮಳೆಯೇ….
ಜಿಟಿ ಜಿಟಿಯ
ಹಾಡೊಂದ ಹಾಡಿ ಕೇಳಿಸು
ಹೃದಯಕ್ಕೆ ಗೀರಿದ ಗಾಯವಾಗಿದೆ
ಅದರ ಮೇಲೆ
ಹನಿ ಹನಿಯ
ತುಂತುರ ಸ್ಪರ್ಶವಿರಲಿ
ಎದೆಯಾಳಕ್ಕೆ ನೋವ ಇಳಿಸುತ್ತಾ
ಮಾಗದ ಗಾಯ ಹಾಗೇ
ಉಳಿಸಿ ಬಿಡು

ಉಸಿರೇ….
ಬೆಳದಿಂಗಳಲಿ ನಕ್ಷತ್ರಗಳ
ಉಯ್ಯಾಲೆ ಮೇಲೆ ಜೀಕಿ
ಮಳೆಯಲಿ
ಘಾಸಿಗೊಂಡ ದೇಹವಿದು
ಹೊಸಿಲಾಚೆ ನಿಂತ ಸಾವು
ದಾರಿ ಕಾಯುತಿದೆ
ಎಣಿಕೆ ತಪ್ಪಿದ
ಎದೆ ಬಡಿತ
ಆರೋಹಣ ಅವರೋಹಣವಾಗಿ
ನಿಂತೇ ಬಿಡುತ್ತಿದೆ
ಇಲ್ಲಿ ಕಳೆದ ನಗು
ಇನ್ಯಾರದೋ ತುಟಿಯoಚಲಿ
ನಗುವಾಗಿ
ಗಲ್ಲದ ಮೇಲೆ
ನವಿಲು ನರ್ತನವಾಗಿದೆ
🌹🌹🌹🌹🌹

                     ಡಾ|| ಸಿ. ನಂದಿನಿ 


Spread the love

About Ad9 News

Check Also

ರಥ ಸಪ್ತಮಿಯ ಪರ್ವ ಕಾಲ

Spread the love  ಮಾಘ ಮಾಸದ ಶುಕ್ಲ ಸಪ್ತಮಿ ಪರ್ವಕಾಲವು ಸೂರ್ಯ ದೇವನಿಗೆ ಅರ್ಪಿತ ರಥ ಸಪ್ತಮಿಯು ಜಗದ ಚೈತನ್ಯದ …

Leave a Reply

Your email address will not be published. Required fields are marked *