Breaking News

ವಿದಾಯ

Spread the love

ಕಾಡುವ ಮಾತುಗಳ
ಮೆರವಣಿಗೆಯಲಿ
ನನ್ನ ಮನ ನಿನಗಾಗಿ
ಮತ್ತೆ ಪಲ್ಲವಿಸಿದೆ
ನನ್ನಂತರಾಳ
ಮಾರ್ದನಿಸುತಿದೆ
ನಿನ್ನ ನೆನಪು ಬಹುವಾಗಿ ಮುತ್ತಲು

ನನ್ನ ಮನ
ಹುಣ್ಣಿಮೆ ಚಂದಿರನಂತೆ
ಮುಗಿಲ ತೊಟ್ಟಿಲಿನ
ನಿನ್ನ ಮಡಿಲಲ್ಲಿ ಮಲಗಿದೆ
ಮೌನ ದಾಟಿ ತೆಪ್ಪಗಿರದ
ಕನಸುಗಳು
ಆಗಾಗ ಬೇಯುತ್ತಿವೆ
ಒಡಲ ಕಿಚ್ಚಿನೊಳಗೆ

ಮೌನದ ಮರೆಯಲಿ
ನಿಂತು
ಮತ್ತೆ ನಿನ್ನ ನೆನಪಿಸಿಕೊಳ್ಳುತ್ತಿವೆ
ನಿನಗೆ ವಿದಾಯ ಹೇಳಲಾಗದೆ…..
ಆ ದಿನವೊಂದನು ಕಾಯುತ್ತೇನೆ
ಚಿಂತೆ ಬಿಡು ನಾ
ಮುಡಿದ ಮಲ್ಲಿಗೆಯದು

       

*ವಿದ್ಯಾ ರೆಡ್ಡಿ ಗೋಕಾಕ*


Spread the love

About Ad9 News

Check Also

ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ

Spread the love ಭಾರತದ ಕುವರಿ ಈ ಪೋರಿ ತನ್ನಯ ಜಾಣ್ಮೆಯಲ್ಲೇ ಎದ್ದ ಕುಮಾರಿ ಎಲ್ಲದರಲ್ಲೂ ಮೊದಲಿಗಳೂರಿ ಅವಳೇ ನಮ್ಮ …

Leave a Reply

Your email address will not be published. Required fields are marked *