Breaking News

ಅಭಿವೃದ್ದಿ ಕಾರ್ಯಗಳನ್ನು ಸಹಿಸದ ಅಂತವರಿಂದ ಜನರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ: ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ: ಜನರ ಆಶೀರ್ವಾದದಿಂದ ಕಳೆದ 19ವರ್ಷಗಳಿಂದ ಈ ಭಾಗದ ಶಾಸಕನಾಗಿ, ಸಚಿವನಾಗಿ ಹಾಗೂ ಕೆಎಮ್‍ಎಫ್ ಅಧ್ಯಕ್ಷನಾಗಿ ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ಕ್ಷೇತ್ರವು ಇನ್ನಷ್ಟೂ ಅಭಿವೃದ್ದಿಯಾಗಲು ಈ ಚುನಾವಣೆಯಲ್ಲಿ ನನಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.

ಗುರುವಾರ ಸಂಜೆ ಪಟ್ಟಣದ ಶಿವಬೋಧರಂಗ ಬ್ಯಾಂಕಿನ ಸಭಾಂಗಣದಲ್ಲಿ ಮೂಡಲಗಿ ಮತ್ತು ಗುರ್ಲಾಪೂರ ವ್ಯಾಪ್ತಿಯ ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮೂಡಲಗಿ ಮತ್ತು ಗುರ್ಲಾಪೂರ ಪಟ್ಟಣದ ಶ್ರೇಯೋಭಿವೃದ್ದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಜನರಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಭಿವೃದ್ದಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆಂದು ತಿಳಿಸಿದರು.
ಜನನಾಯಕನಾಗಿ ಎಂದಿಗೂ ಗುರುತಿಸಿಕೊಂಡಿಲ್ಲ, ಸಾಮಾನ್ಯ ಜನರ ಮಧ್ಯ ಇದ್ದುಕೊಂಡು ಜನಸೇವಕನಾಗಿ ಈ ಭಾಗವನ್ನು ಪ್ರಗತಿ ಮಾಡಿದ್ದೇನೆ. ಮೂಡಲಗಿ ಪಟ್ಟಣದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಅಭಿವೃದ್ದಿಯಾಗಬೇಕಾದರೇ ಅದು ನಮ್ಮಿಂದ ಹಾಗೂ ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯ. ಬೇರೆಯವರಂತೆ ಜನರನ್ನು ಮರಳು ಮಾಡಲು ಸುಳ್ಳು ಆಶ್ವಾಸನೆಗಳನ್ನು ನೀಡುವದಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ವ್ಯವಸ್ಥಿತವಾಗಿ ಸಂಘಟಿತರಾಗಲು ಪ್ರಯತ್ನಿಸಿದ್ದೇನೆ. ಸಣ್ಣ-ಪುಟ್ಟ ಸಮಾಜಗಳು ಸಹ ಸಮಾಜದ ಮುಖ್ಯವಾಹಿನಿಗೆ ತರಲು ನನ್ನಿಂದ ಆಗುವಷ್ಟು ಕೆಲಸ ಮಾಡಿದ್ದೇವೆ. ಎಲ್ಲ ಸಮಾಜಗಳು ಪರಸ್ಪರ ಸಹೋದರತ್ವ ಮನೋಭಾವನೆಯನ್ನು ಬೆಳೆಸಿಕೊಂಡು ಸೌಹಾರ್ಧಯುತವಾಗಿ ಬದುಕು ನಿರ್ವಹಿಸಲು ಸಾಕಷ್ಟು ಶ್ರಮ ವಹಿಸಿದ್ದೇನೆಂದು ಹೇಳಿದರು.
ದೇವರು, ತಾಯಿ-ತಂದೆ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಅರಭಾವಿ ಕ್ಷೇತ್ರವನ್ನು ಅಭಿವೃದ್ದಿ ಮಾಡಿದ್ದೇನೆ. ಇದಕ್ಕೆ ನಾನು ಕೈಗೊಂಡಿರುವ ನಾನಾ ಕಾಮಗಾರಿಗಳೇ ಸಾಕ್ಷಿಯಾಗಿವೆ. ಕೆಲವರು ತಮ್ಮ ತಪ್ಪನ್ನು ಮರೆ ಮಾಚಿಕೊಳ್ಳಲು ಇಲ್ಲ ಸಲ್ಲದ ಆರೋಪಗಳನ್ನು ಈ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಅಭಿವೃದ್ದಿ ಕಾರ್ಯಗಳನ್ನು ಸಹಿಸದ ಅಂತವರಿಂದ ಜನರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ಜನರ ಕಷ್ಟಗಳು ಏನು ಎಂಬುವುದು ಅಂತವರಿಗೆ ಅರ್ಥವಾಗುವದಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಕರ್ನಾಟಕದ ಅಭಿವೃದ್ದಿಯಾಗಬೇಕಾದರೇ ಅದು ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯವಿದೆ. ರಾಜ್ಯದಲ್ಲಿಯೂ ಬಿಜೆಪಿ ಮತ್ತೋಮ್ಮೆ ಅಧಿಕಾರಕ್ಕೆ ಬರಲಿದೆ. ನನಗೆ ನಿಮ್ಮ ಅಮೂಲ್ಯ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗಳನ್ನು ಬಲ ಪಡಿಸಬೇಕು. ಶೇಜ್ ನಂ 5 ಇದ್ದು ಕಮಲದ ಗುರ್ತಿಗೆ ಪ್ರಚಂಡ ಮತ ನೀಡುವಂತೆ ಅವರು ಮನವಿ ಮಾಡಿದರು.
ಮುಖಂಡರಾದ ಎಸ್.ಜಿ.ಡವಳೇಶ್ವರ, ಜಿ.ಟಿ.ಸೋನವಾಲ್ಕರ, ಅಪ್ಪಾಸಾಬ ಹೊಸಕೋಟಿ, ಬಸವಪ್ರಭು ನಿಡಗುಂದಿ, ಬಿ.ಎಚ್.ಸೋನವಾಲ್ಕರ, ರಮೇಶ ಪ್ಯಾಟಿಗೌಡರ, ಚನ್ನಮಲ್ಲಯ್ಯ ನಿರ್ವಾಣಿ, ಹಣಮಂತ ಗುಡ್ಲಮನಿ, ಡಾ|| ಎಸ್.ಎಸ್.ಪಾಟೀಲ, ಕೆ.ಬಿ.ಪಾಟೀಲ, ಈರಣ್ಣಾ ಬನ್ನೂರ, ಪ್ರಕಾಶ ಮಾದರ, ಅನ್ವರ ನದಾಫ, ಪ್ರಕಾಶ ಮುಗಳಖೋಡ, ಆನಂದ ಟಪಾಲ, ರವಿ ಶಾಬನ್ನವರ, ಸಿದ್ದು ಗಡ್ಡೇಕಾರ, ಲಾಲಸಾಬ ಸಿದ್ದಾಪೂರ, ರಮೇಶ ಸಣ್ಣಕ್ಕಿ, ಸಂತೋಷ ಪಾರ್ಶಿ, ರವಿ ಸೋನವಾಲ್ಕರ, ಹುಸೇನ ಶೇಖ, ಮಲ್ಲಿಕ ಹುಣಶ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *