Breaking News

ಬೆಳಗಾವಿ

ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ

ಬೈಲಹೊಂಗಲ : ಪಟ್ಟಣದ ಬಸವ ನಗರದಲ್ಲಿರುವ ಬಸವಯೋಗ ಮಂಟಪದಲ್ಲಿ ತಾಲೂಕಾ ಕನ್ನಡ ಜಾನಪದ ಪರಿಷತ್ ಘಟಕದಿಂದ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಕಜಾಪ ಅಧ್ಯಕ್ಷ ಚಂದ್ರಶೇಖರ ಕೊಪ್ಪದ, ಶಿಕ್ಷಕ ಮಲ್ಲಿಕಾರ್ಜುನ ಕೋಳಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದರೊಂದಿಗೆ, ಮುಂದಿನ ಪೀಳಿಗೆಗೆ ಜಾನಪದದ ಮಹತ್ವವನ್ನು ತಿಳಿಸಿಕೊಡುವುದಾಗಬೇಕು. ಡೊಳ್ಳು ಕುಣಿತ, ವೀರಗಾಸೆ, ಬೀಸುವ ಪದ, ಕುಟ್ಟುವ ಪದ ಮತ್ತು ಸೋಬಾಗಿ ಪದಗಳಲ್ಲಿ ಅಡಗಿರುವ ಮೌಲ್ಯಗಳನ್ನು ಜನರಿಗೆ ಮುಟ್ಟಿಸಬೇಕಾಗಿದೆ …

Read More »

ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕಾನೂನು ರೀತಿ ಕ್ರಮ

ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತ್ತಿದೆ. ಜನ ಕೂಡ ಎಚ್ಚರಿಕೆ ವಹಿಸುತ್ತಿದ್ದಾರೆ. ಸ್ಪಂದಿಸುತ್ತಿದ್ದಾರೆ ಕೂಡ. ಇಂತಹ ಒಂದು ಕಠಿಣ ಪರಿಸ್ಥಿತಿಯ ನಡುವೆ ಯಾರೋ ಕಿಡಿಗೇಡಿಗಳು, ವಾಟ್ಸ್ ಆಪ್ ಮೂಲಕ ಮೂಡಲಗಿಯಲ್ಲಿ ಶಂಕಿತ ಕೊರೋನಾ ಸೋಂಕಿತ ವ್ಯಕ್ತಿ ಯನ್ನು ಪತ್ತೆ ಹಚ್ಚಿದ್ದಾರೆ ಎಂಬ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಯಲ್ಲಿ ಯಾರೂ ಭಯಪಡಬಾರದು, ಈ ಕುರಿತು ವದಂತಿ …

Read More »

ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿರಿಗೆ ಅರಿವು ಮೂಡಿಸುವ ಜಾತಾ ಕಾರ್ಯಕ್ರಮ

ಹಳ್ಳೂರ : ಸಾಮಾನ್ಯ ಘ್ಲೂ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸಗಳು ಹರಡುತ್ತವೆ. ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗೂ, ಬಾಯಿ ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಸೋಂಕು ಹರಡಬಹುದು ಎಂದು ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕರಿ ಮಹೇಶ್ ಕಂಕಣವಾಡಿ ಹೇಳಿದರು. ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಬಗ್ಗೆ ಮುಂಜಾಗೃತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕೊರೊನಾ ಲಕ್ಷಣಗಳು ಕಂಡು ಬಂದ …

Read More »

ಬೆಳಗಾವಿ ಜಿಲ್ಲೆಯ ವಸತಿ ಯೋಜನೆಗಳಲ್ಲಿ ಭಾರೀ ಅಕ್ರಮ; ಅಥಣಿ ತಾಲೂಕಿನಲ್ಲಿ ಸರ್ಕಾರಿ ನೌಕರರೇ ಫಲಾನುಭವಿಗಳು!

ಬೆಳಗಾವಿ: ಎಸ್ಸಿ/ಎಸ್ಟಿ ಫಲಾನುಭವಿಗಳ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡಿಸಿಕೊಂಡು, ಅವರಿಗೆ ಅಲ್ಪ-ಸ್ವಲ್ಪ ಹಣ ನೀಡಿ ಸರ್ಕಾರಿ ನೌಕರರೇ ದೊಡ್ಡ ಮನೆಗಳನ್ನು ಕಟ್ಟಿಕೊಳ್ಳುತ್ತಿರುವ ಆಘಾತಕಾರಿ ಸಂಗತಿ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆಥಣಿ ತಾಲೂಕಿನ ಐಗಳಿ ಗ್ರಾಮ ಪಂಚಾಯತ ಹದ್ದಿಯಲ್ಲಿ ನಡೆದಿವೆ ಎನ್ನಲಾದ ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆಗೆ ಆದೇಶ ನೀಡಲಾಗಿದೆಯಾದರೂ, ತನಿಖೆಯ ಹೆಸರಿನಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಲಾಗುತ್ತಿದೆ. ಈ ಮೂಲಕ ತಪ್ಪಿತಸ್ಥರ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಜಿಲ್ಲಾ …

Read More »

ಬೆಳಗಾವಿ, ರೈಲು ನಿಲ್ಧಾಣದಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ಗೆ ತಟ್ಟಿದ ಕೋರೋನ

ಬೆಳಗಾವಿ- ಕೊರೋನಾ ಸೊಂಕು ಹರಡದಂತೆ ರೈಲ್ವೆ ಇಲಾಖೆಯೂ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ,ರೈಲು ನಿಲ್ಧಾಣಗಳಲ್ಲಿ ಜನಜಂಗುಳಿ ಯನ್ನು ನಿಯಂತ್ರಿಸಲು ಬೆಳಗಾವಿ ರೈಲು ನಿಲ್ಧಾಣದಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಹೆಚ್ಚಿಸಿದೆ ಬೆಳಗಾವಿ,ಹುಬ್ಬಳ್ಳಿ, ಮತ್ತು ಬಳ್ಳಾರಿ ರೈಲು ನಿಲ್ಧಾಣಗಳಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಮಾರ್ಚ 31ರವರೆಗೆ 50 ರೂ ಗೆ ಹೆಚ್ಚಿಸಿ ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರೈಲು ನಿಲ್ಧಾಣಗಳಲ್ಲಿ ಅನವಶ್ಯಕವಾಗಿ ಹೆಚ್ವು ಜನ ಸೇರಬಾರಬಾದು ಎನ್ನುವ ಸದುದ್ದೇಶದಿಂದ ಅಧಿಕಾರಿಗಳು …

Read More »

ದೇವರಿಗೆ ತಟ್ಟಿದ ಕೋರೋನಾ

ಗೋಕಾಕ್ – ಕೊರೊನಾ ವೈರಸ್ ಜಾತ್ರೆಗೂ ತಟ್ಟಿದ್ದು, ಯುಗಾದಿ ಹಬ್ಬದಂದು ನಡೆಯಬೇಕಿದ್ದ ತಾಲ್ಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮದೇವಿ ಜಾತ್ರೆಯನ್ನು ರದ್ದುಪಡಿಸಲಾಗಿದೆ. ಮಾ. 24 ರಿಂದ 29 ರ ವರೆಗೆ ನಡೆಯಬೇಕಿದ್ದ ಜಾತ್ರೆಯನ್ನು ಕೊರೋನಾ ಭೀತಿಯಿಂದ ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಪ್ರಮುಖರಾದ ಭೂತಪ್ಪ ಗೋಡೇರ ಮತ್ತು ಹಣಮಂತ ಕೊಪ್ಪದ ಅವರು ತಿಳಿಸಿದ್ದಾರೆ.

Read More »

ಮೂಡಲಗಿ ಪುರಸಭೆ ಅಧಿಕಾರಿಗಳ ವಿರುದ್ಧ: ವಾಹನ ಸವಾರರ ಆಕ್ರೋಶ

ಮೂಡಲಗಿ : ಪಟ್ಟಣದ ಮುಖ್ಯ ಕಲ್ಮೇಶ್ವ ಸರ್ಕಲ್ ಹಾಗೂ ಮುಖ್ಯ ರಸ್ತೆಯಲ್ಲಿ ಹೈಮಸ್ಟ ಕಂಬವನ್ನು ಸುಮಾರು ಒಂದು ತಿಂಗಳಿದ ಕಾರ್ಯ ಪ್ರಾರಂಭವಾದರೂ ಕೂಡ ಆಮೆ ವೇಗದಲ್ಲಿ ನಡಿತಾ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಬುದುವಾರ ರಾತ್ರಿ ರಸ್ತೆಯ ಅಡ್ಡಲಾಗಿ ಗುಂಡಿ ತೋಡಿದ್ದಾರೆ. ಪ್ರತಿದಿನ ನೂರಾರು ವಾಹನ ಸವಾರರು ಹಾಗೂ ಬೇರೆ ಪರ ಸ್ಥಳಗಳಿಂದ ಬರುವಂತ ವ್ಯಾಪಾರಿಗಳ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಯಲ್ಲಿ ಅಡ್ಡಲಾಗಿರುವ ಗುಂಡಿಯನ್ನು ನೋಡದೆ ವಾಹನ ಚಲಾಯಿಸಿದರೆ ವಾಹನ …

Read More »

ಮೂಡಲಗಿ ಗೆಳೆಯರ ಬಳಗದಿಂದ ಆಯೋಜಿಸಿದ ಪಾಟೀಲ್ ಪುಟ್ಟಪ್ಪ ಶೃದ್ದಾಂಜಲಿ

ಮೂಡಲಗಿ: ಕನ್ನಡದ ಬಗ್ಗೆ ಯಾರೆ ಹಗುರವಾಗಿ ಮಾತನಾಡಿದರೆ ಸ್ಥಳದಲ್ಲಯೇ ಪ್ರತುತ್ತರ ನೀಡುವ ಧೈರ್ಯ ಮತ್ತು ಕನ್ನಡ ಹುಚ್ಚು ಪ್ರೇಮ ಬೆಳೆಸಿಕೊಂಡು ಮಹಾರಾಷ್ಟ್ರ ದಿಂದ ಕನ್ನಡ ನಾಯಿ ಎಂದು ಕರೆಸಿಕೊಂಡು ಹೆಮ್ಮೆ ಪಟ್ಟ ಮಹಾನ ವ್ಯಕ್ತಿ ಎಂದರೆ ಅದು ಪಾಟೀಲ್ ಪುಟ್ಟಪ ಒಬ್ಬರೆ ಎಂದು ಮಕ್ಕಳ ಸಾಹಿತಿ ಪ್ರೋ ಸಂಗಮೇಶ ಗುಜಗೊಂಡ ಹೇಳಿದರು ಅವರು ಮಂಗಳವಾರ ಸಂಗಪ್ಪಣ್ಣ ವೃತ್ತದಲ್ಲಿ ೮೭-೮೮ ಸಾಲಿನ ವಿಧ್ಯಾರ್ಥಿಗಳ ಗೆಳೆಯರ ಬಳಗದಿಂದ ಆಯೋಜಿಸಿದ ಪಾಟೀಲ್ ಪುಟ್ಟಪ್ಪ ಶೃದ್ದಾಂಜಲಿ …

Read More »

ಸತೀಶ ಶುಗರ್ಸ್ ಹಾಗೂ ಪ್ರಭಾ ಶುಗರ್ಸ್ ನೆರವಿನ ರಸ್ತೆಗಳ ಕಾಮಗಾರಿಗೆ ಚಾಲನೆ

ಮೂಡಲಗಿ: ಸತೀಶ ಶುಗರ್ಸ್ ಹಾಗೂ ಪ್ರಭಾ ಶುಗರ್ಸ್ ನೆರವಿನ ರಸ್ತೆಗಳ ಕಾಮಗಾರಿಗೆ ಇಲ್ಲಿಗೆ ಸಮೀಪದ ಗುಜನಟ್ಟಿ ಗ್ರಾಮದಲ್ಲಿ ಯುವ ಮುಖಂಡ ನಾಗಪ್ಪ ಶೇಖರಗೋಳ ಮತ್ತು ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ ಅವರು ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿ ರಸ್ತೆಗಳ ಸುಧಾರಣೆಗೆ ಗುದ್ದಲಿ ಪೂಜೆಯನ್ನು ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಂಗಪ್ಪ ಕುರಬೇಟ, ಸಾಬಪ್ಪ ಬಂಡ್ರೋಳಿ, ಬಸು ಬಂಡ್ರೋಳಿ, ಗಂಗಪ್ಪ ಬಂಡ್ರೋಳ್ಳಿ ಮುಂತಾದವರು ಉಪಸ್ಥಿತರಿದ್ದರು

Read More »

ಐವರು ಅಂತರಾಜ್ಯ ಅಪಹರಣಕಾರರ ಬಂಧನ

ಚಿಕ್ಕೋಡಿ : ಹಣಕ್ಕಾಗಿ ಸುಪಾರಿ ಪಡೆದು ಜನರನ್ನು ಅಪಹರಿಸುತ್ತಿದ್ದ ಐವರು ಅಂತರಾಜ್ಯ ಅಪಹರಣಕಾರರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾರ್ಚ್ 15 ರಂದು ಶಬ್ಬೀರ್ ಬಾಬಾಲಾಲ್ ಮಕಾಂದಾರ (54) ಅವರು ನಿಪ್ಪಾಣಿ ಬಳಿಯ ಕೊಗನೊಳ್ಳಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಇಚಲಕರಂಜಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ಆರೋಪಿಗಳು ಬಲವಂತವಾಗಿ ಮಗನ ಮುಂದೆಯೇ ಶಬ್ಬೀರ್ ಮಕಾಂದಾರನನ್ನು ತಮ್ಮ ಇನ್ನೋವಾ …

Read More »