Breaking News

ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ

Spread the love

ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ
ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ

ಮನೆಯ ಸೂರು ಕಾಲನ ಹೊಡೆತಕೆ ಸಡಿಲಾಗಿದೆ
ಜೀವ ಹೊಸ ಸೂರಿನ ಆಸರೆ ಹುಡುಕಿ ಸಾಗಿದೆ

ಪ್ರಾಣ ಜಲವಾಗಿದ್ದ ಬಾವಿಯ ಸೆಲೆ ಬತ್ತಿದೆ
ದಾಹ ತಣಿಸಲು ನದಿಯನರಸಿ ವಲಸೆ ಹೋಗಿದೆ

ಎದೆಯ ಕ್ಷೀರ ಉಣಿಸಿದವಳು ಹಣ್ಣೆಲೆಯಾದಳು
ಚಿಗುರೆಲೆ ಬಣ್ಣದ ಕನಸನರಸಿ ಪಯಣ ಬೆಳೆಸಿದೆ

‘ಆರಾಧ್ಯೆ’ “ಕಾಣದ ಕಡಲಿಗೆ ಮನ ಹಂಬಲಿಸಿದೆ”
ಜಾಗತೀಕರಣದ ಹೆಸರಲಿ ತಾಯಿಬೇರು  ನಲುಗಿದೆ

ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ


Spread the love

About Ad9 News

Check Also

ರಥ ಸಪ್ತಮಿಯ ಪರ್ವ ಕಾಲ

Spread the love  ಮಾಘ ಮಾಸದ ಶುಕ್ಲ ಸಪ್ತಮಿ ಪರ್ವಕಾಲವು ಸೂರ್ಯ ದೇವನಿಗೆ ಅರ್ಪಿತ ರಥ ಸಪ್ತಮಿಯು ಜಗದ ಚೈತನ್ಯದ …