Breaking News

ಶ್ರೀಗುರು ಪವಾಡ ಪುರುಷ ತಿಪ್ಪೇಸ್ವಾಮಿಯ ರಥ

Spread the love

 

ಧರೆಯೊಳಗೆ ಮಾನವನಾಗಿ ಜನಿಸಿದ
ಕೂಲಿಯಾಳಾಗಿ ನೆರೆಮನೆಯಲ್ಲಿ ದುಡಿದ
ತಾಯಿ ಬಸುರಿಗೂ ಲೆಕ್ಕಹಾಕಿದ
ಪವಾಡಗಳ ಸುರಿಮಳೆಯ ಸುರಿಸಿದ!

ಕೊಬ್ಬರಿ ಸುಟ್ಟ ಬೆಳಕಿನಲಿ ಮುನ್ನಡೆದ
ಫಣಿಯಪ್ಪನ ಮನೆಯಲಿ ಆಶ್ರಯಪಡೆದ
ನಾಯ್ಕನಹಟ್ಟಿಯ ದೊರೆಯಾಗಿಮೆರೆದ
ಬಿಳಿನೀರ ಚಿಲುಮೆಯ ಹರಿಸಿದ!

ಸದೃಶ್ಯನಾಗಿ ಜಾತಿಭೇದತೊಲಗಿಸಿದ
ಮಾರಮ್ಮನ ಗುಡಿಯಲಿ ಸ್ಥಾನವ ಬೇಡಿದ
ಜೋಳಿಗೆ ಬೆತ್ತದಿ ಗುಡಿಯತುಂಬಿಸಿದ
ಮಾರಮ್ಮಗೆ ತಡೆಯೊಡ್ಡಿ ತಾನೇ ನೆಲೆಸಿದ!

ಐದುಗಾಲಿರಥ ಹರಕೆಕೂಸನು ದಾಟಿತು
ನೆರೆದ ಜನದಲಿ ಮಗುವು ನಕ್ಕಿತು
ಸತ್ತೆಮ್ಮಯ ಹಾಲನು ಕರೆದುಂಡ ತಿಪ್ಪೇಶ
ಆಂಜನೇಯಗೆ ಲಿಂಗಧರಿಸಿದ ರುದ್ರೇಶ!

ಮಾಡಿದಷ್ಟು ನೀಡೆಂದು ಹರಸಿದ
ರಾಣಿ ನಾಗತಿಗೆ ಮಕ್ಕಳಭಾಗ್ಯನೀಡಿದ
ಜನರಕಷ್ಟಗಳ ಬಗೆಹರಿಸಿದ
ಬೇಡಿದ ವರಗಳ ಕರುಣಿಸಿದ!

ಪಾಲ್ಗುಣ ಪೌರ್ಣಮಿಗೆ ಸಾಗಿತು ರಥವು
ಜನಗಜಂಗುಳಿಯು ಭಕ್ತರ ಸಂಭ್ರಮವು
ತಿಪ್ಪೇಶ ಸರಿಯೇ ನಿನಗಾರು ಸರಿಯೇ
ಸರಿಸರಿಎಂದವರಹಲ್ಲುಮುರಿಯೇ!

ಜೈ ಜೈ ಶ್ರೀಗುರು ತಿಪ್ಪೇಶ
ನಾಯಕನಹಟ್ಟಿಯ ಶ್ರೀರುದ್ರೇಶ
ಹರಹರ ಶ್ರೀವರಗುರು ಮಾಂತೇಶ
ಧರೆಯಲಿ ನೆಲೆಸು ಶ್ರೀಗುರುತಿಪ್ಪೇಶ!!

ಧರಣೀಪ್ರಿಯೆ
ದಾವಣಗೆರೆ


Spread the love

About Ad9 News

Check Also

ತೊಟ್ಟಿಲು

Spread the love ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು …